Rajesh Naik

ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಯಂತ್ರೋಪಕರಣ ಹಸ್ತಾಂತರಿಸಿದ ಶಾಸಕ

ಬಂಟ್ವಾಳ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಸಾರ್ವಜನಿಕರಿಗೆ ದೊರಕುವುದಕ್ಕಾಗಿ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಉಳಿಪ್ಪಾಡಿಯವರ ಮನವಿಯ ಮೇರೆಗೆ ಮಂಗಳೂರು ಎ.ಜೆ. ಆಸ್ಪತ್ರೆಯ ವತಿಯಿಂದ ನೀಡಲ್ಪಟ್ಟ ಸುಮಾರು ಐವತ್ತು ಲಕ್ಷ ರೂ. ಉಪಕರಣಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರೊಂದಿಗೆ ದಾನಿಗಳಾದ ಎ.ಜೆ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಉಪಸ್ಥಿತರಿದ್ದರು. ಇನ್ನು ಐದಾರು ತಿಂಗಳೊಳಗೆ ಆಸ್ಪತ್ರೆಗೆ ಎಸ್.ಟಿ.ಪಿಯನ್ನು ಒದಗಿಸಲಾಗುತ್ತದೆ. ಇದರಿಂ ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ನಡೆಯಲಿದೆ. ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ […]

Read More

ನೆಟ್ಲ ಶಾಲೆ ಅಂಗನವಾಡಿ ಕೇಂದ್ರ ಕಟ್ಟಡದ ಉದ್ಘಾಟನೆ

ಬಂಟ್ವಾಳ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಂಗನವಾಡಿ ಕೇಂದ್ರ ಪ್ರಮುಖವಾದ ಘಟ್ಟ, ಅಂಗನವಾಡಿ ದೇವಾಲಯಕ್ಕೆ ಸಮಾನ ಅಲ್ಲಿ ಕಲಿಯುವ ಮಕ್ಕಳು ದೇವರಿಗೆ ಸಮಾನ ಎಲ್ಲಾ ಅಂಗನವಾಡಿಗಳು ನೆಟ್ಲ ಅಂಗನವಾಡಿಯಂತೆ ಇರಬೇಕು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಈ ಕೇಂದ್ರ ಇತರ ಅಂಗನವಾಡಿಗಳಿಗೆ ಮಾದರಿಯಾಗಿದೆ ಎಂದು ರಾಜೇಶ್ ನಾೖಕ್‌ ಉಳಿಪ್ಪಾಡಿ ಗುತ್ತು ಅವರು ಹೇಳಿದರು. ಅವರು ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ, ಗೋಳ್ತಮಜಲು ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಹಾಗೂ ಶಿಶು […]

Read More

ಸಾಲೆತ್ತೂರು: ಉಳಿಯತ್ತಡ್ಕ ಕಿಂಡಿ ಅಣೆಕಟ್ಟು ದುರಸ್ಥಿಗೆ ಆಗ್ರಹ

ಸಾಲೆತ್ತೂರು ಗ್ರಾಮದ ಸುಮಾರು ವರ್ಷ 100 ಹಿಂದೆ ನಿರ್ಮಿತಗೊಂಡಿರುವ ಉಳಿಯತ್ತಡ್ಕ ಕಿಂಡಿ ಅಣೆಕಟ್ಟು ವೀಕ್ಷಿಸಿ ಸಣ್ಣ ನೀರಾವರಿ ಇಲಾಖೆಗೆ ತಕ್ಷಣ ದುರಸ್ಥಿಗೆ ರಾಜೇಶ್ ನಾೖಕ್‌ ಉಳಿಪ್ಪಾಡಿಯವರು ತಿಳಿಸಿದರು. ಈ ಸಂಧರ್ಭದಲ್ಲಿ ಅಣೆಕಟ್ಟು ನಿರ್ವಹಣಾ ಸಮಿತಿ ಅಧ್ಯಕ್ಷ ಲೋಕನಾಥ ರೈ, ಕಾರ್ಯದರ್ಶಿ ಧಮೇಂದ್ರ, ಜತ್ತಪ್ಪ ಗೌಡ, ಸಾಲೆತ್ತೂರು ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಪಂಚಾಯತ್ ಸದಸ್ಯ ದೇವದಾಸ ಶೆಟ್ಟಿ ಪಾಲ್ತಾಜೆ, ಸಾಲೆತ್ತೂರು ಗ್ರಾಮ ಸಮಿತಿ ಅಧ್ಯಕ್ಷ ವಿದ್ಯೇಶ್ ರೈ, ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಪುಷ್ಪರಾಜ್ ಚೌಟ ಉಪಸ್ಥಿತರಿದ್ದರು.

Read More

ಮಲಾರಬೀಡು ಮಲರಾಯ ದೈವಸ್ಥಾನಕ್ಕೆ ಶಾಸಕ ರಾಜೇಶ್ ನಾೖಕ್‌ ಭೇಟಿ

ಮಲರಾಯ ದೈವದ ಮೂಲಸ್ಥಾನ ಮಲಾರಬೀಡು ಮಲರಾಯ ದೈವಸ್ಥಾನಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿಯಿಂದ ಶಾಸಕರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಯಜಮಾನ ಮಹಾಬಲ ಶೆಟ್ಟಿ, ರಾಧಕೃಷ್ಣ,ದಿನೆಶ್ ಶೆಟ್ಟಿ ಮಲಾರು, ನಾರಾಯಣ ಶೆಟ್ಟಿ ಮಲಾರು, ಮಾಜಿ ಪಂಚಾಯತ್ ಸದಸ್ಯರಾದ ಶಂಕರ ರೈ, ಸಂಕಪ್ಪ ರೈ, ಪಂಚಾಯತ್ ಸದಸ್ಯ ದೇವದಾಸ ಶೆಟ್ಟಿ ಪಾಲ್ತಾಜೆ, ಸಾಲೆತ್ತೂರು ಗ್ರಾಮ ಸಮಿತಿ ಅಧ್ಯಕ್ಷ ವಿದ್ಯೇಶ್ ರೈ, ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷ ಬಾಲಕೃಷ್ಣ […]

Read More

ಸ್ವಚ್ಛತೆಗೆ ಹಿಂದೇಟು ಬೇಡ: ರಾಜೇಶ್‌ ನಾೖಕ್‌

ಬಂಟ್ವಾಳ: ಸ್ವಚ್ಛತೆ ನಮ್ಮ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಸಾರ್ವಜನಿಕರನ್ನು ಸಂಘ- ಸಂಸ್ಥೆಗಳನ್ನು ಸೇರಿಕೊಂಡು ಸ್ವತ್ಛತೆಯ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕ್ರಮ ನಿಜವಾದ ಸಾಮಾಜಿಕ ಕಳಕಳಿಯದ್ದು. ನಗರ ಪ್ರದೇಶಗಳಲ್ಲಿ ಶೌಚಾಲಯದ ಅಗತ್ಯ ಹೆಚ್ಚು ಇದೆ. ತಾಲೂಕಿನಲ್ಲಿ ಸ್ವಚ್ಛತೆಯ ಬಗ್ಗೆ ಅಧಿಕಾರಿಗಳು ಹಿಂದೇಟು ಹಾಕಬಾರದು ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು. ಅವರು ನ. 19ರಂದು ಬಿ.ಸಿ.ರೋಡ್‌ ಸ್ಪರ್ಶ ಕಲಾಮಂದಿರದಲ್ಲಿ ತಾಲೂಕು ಪಂಚಾಯತ್‌ ಬಂಟ್ವಾಳ ಮತ್ತು ಗ್ರಾಮ ಪಂಚಾ ಯತ್‌ಗಳ ಆಶ್ರಯದಲ್ಲಿ ನಡೆದ ವಿಶ್ವ ಶೌಚಾಲಯ […]

Read More

ಓದುವ ಹವ್ಯಾಸ ಬೆಳೆಸಿಕೊಳ್ಳಿ : ಶಾಸಕ ನಾೖಕ್

ಬಂಟ್ವಾಳ : ಯುವ ಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ, ಆರೋಗ್ಯಕರ ಚಿಂತನೆ ನೀಡ ಬೇಕಾಗಿದೆ. ಗ್ರಂಥಾಲಯಗಳು ಸುದೀರ್ಘ‌ ಅವಧಿಯಿಂದ ಜ್ಞಾನದ ಕೊಡುಗೆ ನೀಡಿವೆ. ಆಧುನಿಕ ವ್ಯವಸ್ಥೆಯಲ್ಲಿ ಹೊಸತನಕ್ಕೆ ತೆರೆದು ಕೊಳ್ಳುವುದು ಅವಶ್ಯ ಎಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು. ಅವರು ನ. 18ರಂದು ತಾ.ಪಂ. ಎಸ್‌ಜಿ ಎಸ್‌ವೈ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು, ಶಾಖಾ ಗ್ರಂಥಾಲಯ ಬಂಟ್ವಾಳ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ […]

Read More

ಇಂದಿರಾ ಕ್ಯಾಂಟೀನ್‌ನ ಅಕ್ರಮ ಕಾಮಗಾರಿಗೆ ಸಹಕಾರ ಇಲ್ಲ: ಶಾಸಕ ರಾಜೇಶ್ ನಾಯ್ಕ್

ಬಿ.ಸಿ ರೋಡಿನಲ್ಲಿರುವ ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಕಾಮಗಾರಿಯನ್ನು ಆರಂಭಿಸಿದ ವೇಳೆ ಪುರಸಭಾ ಸದಸ್ಯರಾದ ಗೋವಿಂದ ಪ್ರಭು ಮತ್ತು ದೇವದಾಸ್ ಶೆಟ್ಟಿ ವಿರೋಧಿಸಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ವಿವಾದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ ಅಕ್ರಮವಾಗಿ ನಡೆಯುವ ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಕಾಮಗಾರಿಯನ್ನು ನಿಲ್ಲಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಮತ್ತು ಕಂದಾಯ ಅಧಿಕಾರಿಗಳಿಗೆ ಆಗ್ರಹಿಸಿದರು. ಅಕ್ರಮವಾಗಿ ನಡೆಯುವ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ಸಹಕಾರ ನೀಡುವುದಿಲ್ಲ ಎಂದರು. ಈ ಸಂದರ್ಭದಲ್ಲಿ ನಗರ ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ […]

Read More

ಶ್ರೀ ಅನಂತ ಕುಮಾರ್‌ ನಿಧನ: ಶ್ರದ್ದಾಂಜಲಿ ಸಭೆ

ಭಾರತೀಯ ಜನತಾ ಪಾರ್ಟಿಯ ಹಿರಿಯ ನೇತಾರರು, ಕೇಂದ್ರ ಸಚಿವರು ಮಾನ್ಯ ಶ್ರೀ ಅನಂತ ಕುಮಾರ್‌ಜಿ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದು ಅವರಿಗೆ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಶ್ರದ್ದಾಂಜಲಿ ಅರ್ಪಿಸಿದರು. ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷರಾದ ಜಿ.ಆನಂದ ರವರು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕ್ಷೇತ್ರದ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಶ್ರದ್ದಾಂಜಲಿ ಅರ್ಪಿಸಿದರು. ಜಿಲ್ಲಾ ಬಿ.ಜೆ.ಪಿ ಕಾರ್ಯದರ್ಶಿ ಸುಗುಣ […]

Read More

ಅನಂತ್ ಕುಮಾರ್ ಜಿಯವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ ಶಾಸಕ ರಾಜೇಶ್ ನಾಯ್ಕ್

ಹಿರಿಯ ಬಿಜೆಪಿ ನಾಯಕ, ರಾಜಕೀಯ ಮುತ್ಸದ್ಧಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ, ಹಾಗು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಶ್ರೀ ಅನಂತ್ ಕುಮಾರ್ ಜಿಯವರು ಇಂದು ನಮ್ಮನ್ನಗಲಿದ್ದಾರೆ. ಇಹಕಾಯವನ್ನು ತ್ಯಜಿಸಿದ ಅವರ ಆತ್ಮಕ್ಕೆ ದೇವ ಸಾಯುಜ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸೋಣ. ಅದ್ಭುತ ಮಾತುಗಾರ, ಅತ್ಯುನ್ನತ ಸಂಘಟಕ, ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಶ್ರೀಯುತರ ಅಗಲಿಕೆ ದೇಶಕ್ಕೆ, ಪಕ್ಷಕ್ಕೆ, ಸಂಘಟನೆಗೆ ಬಹುದೊಡ್ಡ ನಷ್ಟ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ, ಸ್ನೇಹಿತರಿಗೆ, […]

Read More

ಶ್ರೀ ಕ್ಷೇತ್ರ ಪಡುಮಲೆಗೆ ಭೇಟಿ : ಜೀರ್ಣೋದ್ಧಾರದ ಕಾರ್ಯ ಪರಿಶೀಲನೆ

ಶ್ರೀ ಕ್ಷೇತ್ರ ಪಡುಮಲೆಗೆ ಹರಿಕೃಷ್ಣ ಬಂಟ್ವಾಳರ ನೇತೃತ್ವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಜೀರ್ಣೋದ್ಧಾರದ ಕಾರ್ಯಗಳನ್ನು ವೀಕ್ಷಿಸಿದರು. ಈ ಸಂಧರ್ಭದಲ್ಲಿ ಸ್ಥಳೀಯರು ಉಪಸ್ಥಿತರಿದ್ದರು.

Read More

Back To Top
Highslide for Wordpress Plugin