Rajesh Naik

ಶ್ರೀ ಅನಂತ ಕುಮಾರ್‌ ನಿಧನ: ಶ್ರದ್ದಾಂಜಲಿ ಸಭೆ

ಭಾರತೀಯ ಜನತಾ ಪಾರ್ಟಿಯ ಹಿರಿಯ ನೇತಾರರು, ಕೇಂದ್ರ ಸಚಿವರು ಮಾನ್ಯ ಶ್ರೀ ಅನಂತ ಕುಮಾರ್‌ಜಿ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದು ಅವರಿಗೆ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಶ್ರದ್ದಾಂಜಲಿ ಅರ್ಪಿಸಿದರು. ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷರಾದ ಜಿ.ಆನಂದ ರವರು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕ್ಷೇತ್ರದ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಶ್ರದ್ದಾಂಜಲಿ ಅರ್ಪಿಸಿದರು. ಜಿಲ್ಲಾ ಬಿ.ಜೆ.ಪಿ ಕಾರ್ಯದರ್ಶಿ ಸುಗುಣ ಕಿಣಿ, ಕ್ಷೇತ್ರದ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ, ಗೋವಿಂದ ಪ್ರಭು, ಜಿಲ್ಲಾ ಪಂ.ಸದಸ್ಯೆ ಕಮಲಾಕ್ಷಿ ಪೂಜಾರಿ, ವಿಜಯ ರೈ, ಶ್ರೀಕಾಂತ್ ಶೆಟ್ಟಿ, ಗಣೇಶ್ ರೈ, ರಮಾನಾಥ ರೈ, ಸೀತಾರಾಮ ಪೂಜಾರಿ, ರವೀಂದ್ರ ಕಂಬಳಿ, ವಜ್ರನಾಥ ಕಲ್ಲಡ್ಕ, ತನಿಯಪ್ಪ ಗೌಡ, ಪುರುಷೋತ್ತಮ ಶೆಟ್ಟಿ, ಸಂತೋಷ್ ಕುಮಾರ್,ವಿಠಲ್ ನಾಯ್ಕ, ಗೋಪಾಲ್ ಸುವರ್ಣ, ಪ್ರಮೋದ್ ಕುಮಾರ್, ಗುರುದತ್ ನಾಯಕ್, ವಿರೇಂದ್ರ ಕುಲಾಲ್, ಪಂ.ಸಮಿತಿಯ ಅಧ್ಯಕ್ಷ ಕಾರ್ಯದರ್ಶಿಗಳು, ಪುರಸಭಾ ಸದಸ್ಯರುಗಳು ಉಪಸ್ಥಿತರಿದ್ದರು.

Ananth-Kumar-Shraddhanjali-sabhe-1

Ananth-Kumar-Shraddhanjali-sabhe-2

Ananth-Kumar-Shraddhanjali-sabhe-3

Back To Top
Highslide for Wordpress Plugin