Rajesh Naik

ಪೊಳಲಿ ಅಮ್ಮನೆಡೆಗೆ ನಮ್ಮ ನಡಿಗೆ ಪಾದಯಾತ್ರೆ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಭಕ್ತ ವೃಂದದಿಂದ ತಾ. 26-03-2017 ೭ರ ಆದಿತ್ಯವಾರ ಪೊಳಲಿ ಅಮ್ಮನೆಡೆಗೆ ನಮ್ಮ ನಡಿಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಬಿ.ಸಿ ರೋಡಿನ ಶ್ರೀ ರಕ್ತೇಶ್ವರಿದೇವಿ ದೇವಸ್ಥಾನದಿಂದ ಬೆಳಿಗ್ಗೆ ಪೂಜ್ಯ ಸ್ವಾಮಿಜಿಗಳಾದ ಮಾಣಿಲ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತಾನ್ಯಂದ ಸ್ವಾಮೀಜಿಯವರು ಚಾಲನೆ ನೀಡಿದರು.

polali-prg

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಉಳಿಪ್ಪಾಡಿಗುತ್ತು ರಾಜೇಶ ನಾಯ್ಕ್, ಮಾಜಿ ಶಾಸಕರಾದ ಪದ್ಮನಾಭಕೊಟ್ಟಾರಿ, ದೇವದಾಸ ಶೆಟ್ಟಿ, ವೆಂಕಟೇಶ ನಾವಡ, ಸುಲೋಚನಾ ಜಿ.ಕೆ ಭಟ್, ರಾಮದಾಸ ಬಂಟ್ವಾಳ, ಜಿ.ಆನಂದ, ಸೇಸಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ರಮನಾಥ ರಾಯಿ, ಲೋಕೇಶ್ ಭರಣಿ, ವಜ್ರನಾಥ ಕಲ್ಲಡ್ಕ, ಚಂದ್ರಶೇಖರ ರಾವ್, ಕೃಷ್ಣರಾಜ ಮಾರ್ಲ ಮುತ್ತೂರು, ಪ್ರೇಮನಾಥ ಶೆಟ್ಟಿ, ಕೃಷ್ಣ ಕುಮಾರ್ ಪೂಂಜ, ಜನಾರ್ಧನ ಬಾರಿಂಜೆ, ಸುಕೇಶ ಚೌಟ, ಪ್ರದೀಪ್‌ ಅಜ್ಜಿಬೆಟ್ಟು, ಚಂದ್ರ ಕಲಾಯಿ, ನಂದರಾಮ ರೈ, ಸಂಪತ್‌ಕುಮಾರ್ ಶೆಟ್ಟಿ, ಗೋಪಾಲ ಸುವರ್ಣ, ಚಂದ್ರಾವತಿ, ಸೀತಾರಾಮ ಪೂಜಾರಿ, ಸಂಪತ್‌ಕುಮಾರ್ ಶೆಟ್ಟಿ, ಮಚ್ಚೇಂದ್ರ ಸಾಲ್ಯಾನ್, ವಿದ್ಯಾಚರಣ್ ಭಂಡಾರಿ, ರಂಗನಾಥ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾಜರಾಜೇಶ್ವರಿ ತಾಯಿಯ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿ ಪುನೀತರಾದರು.

Back To Top
Highslide for Wordpress Plugin