Rajesh Naik

ಕುದ್ರೆಬೆಟ್ಟು ಕಾಂಕ್ರೀಟಿಕರಣ ಕಾಮಗಾರಿಗೆ ಗುದ್ದಲಿ ಪೂಜೆ

ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲ್ ಅವರ 5 ಲಕ್ಷ ಅನುದಾನದಲ್ಲಿ, ಮಾಣಿ ಜಿ.ಪಂ.ಸದಸ್ಯ ಆರ್ ಚೆನ್ನಪ್ಪ ಕೋಟ್ಯಾನ್ ಅವರ 2 ಲಕ್ಷ ಅನುದಾನ ಮತ್ತು ಬಾಳ್ತಿಲ ಗ್ರಾ.ಪಂ.ಅವರ 1 ಲಕ್ಷ ಅನುದಾನದಲ್ಲಿ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು -ದರ್ಖಾಸು-ಬಿ.ಆರ್.ನಗರ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಬಿ.ಜೆ.ಪಿ.ಮುಖಂಡ ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್ ಗುದ್ದಲಿ ಪೂಜೆ ನೆರೇರಿಸಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ.ಸದಸ್ಯ ಆರ್ ಚೆನ್ನಪ್ಪ ಕೋಟ್ಯಾನ್ , ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮಾ, ಗ್ರಾಮ ಸಮಿತಿ ಅಧ್ಯಕ್ಷ ಲೋಕಾನಂದ,ಮಾಜಿ ಗ್ರಾ.ಪಂ. ಅಧ್ಯಕ್ಷ ಸುಂದರ ಸಾಲ್ಯಾನ್, ಹಿಂದುಳಿದ ವರ್ಗದ ಅಧ್ಯಕ್ಷ ಬಿ.ಕೆ ಅಣ್ಣಿ ಪೂಜಾರಿ, ಗ್ರಾ.ಪಂ. ಸದಸ್ಯರಾದ ಆನಂದ ಶೆಟ್ಟಿ, ಹಿರಣ್‌ಮಯಿ, ನೇತ್ರಾವತಿ, ಜಯರಾಮ ಕುಲಾಲ್, ಲಕ್ಷೀ ಗೋಪಾಲಾಚಾರ್ಯ , ವೆಂಕಟರಾಯ ಪ್ರಭು, ಪುಷ್ಪಾ ಬಿ.ಶೆಟ್ಟಿ, ಗುಲಾಬಿ ಮತ್ತು ಕ್ರಷ್ಣ ಐತಾಳ್, ಪವನ್ ಕುಮಾರ್, ವಜ್ರನಾಥ ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.

1

Back To Top
Highslide for Wordpress Plugin