Rajesh Naik

ಒಂಭತ್ತನೇ ದಿನದ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಗೆ ಮೂರ್ಜೆಯಲ್ಲಿ ಚಾಲನೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಒಂಭತ್ತನೇ ದಿನದ ಪಾದಯಾತ್ರೆಗೆ ಬುಧವಾರ ಬೆಳಿಗ್ಗೆ ಮೂರ್ಜೆಯಿಂದ ಚಾಲನೆ ನೀಡಲಾಯಿತು.

1

ವಂದೇ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಯಾತ್ರೆ ಕಾವಳಮೂಡೂರು ಮತ್ತು ಕಾವಳಪಡೂರು ಗ್ರಾಮಗಳಲ್ಲಿ ಸಂಚರಿಸಿತು.

2

ಒಂಭತ್ತನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರಮುಖರಾದ ಪುರುಷ ಸಾಲ್ಯಾನ್ ನೆತ್ತರಕೆರೆ, ತುಂಗಪ್ಪ ಬಂಗೇರ, ಪ್ರಥ್ವಿರಾಜ್, ದೇವದಾಸ್ ಶೆಟ್ಟಿ, ರಾಮ್‌ದಾಸ್ ಬಂಟ್ವಾಳ, ಅಬ್ದುಲ್ ರಝಾಕ್, ರಮಾನಾಥ ರಾಯಿ, ಮೋಹನ್ ಆಚಾರ್ಯ, ಶಂಕರ ಶೆಟ್ಟಿ, ರಾಜಗೋಪಾಲ್, ದಾಮೋದರ ಪ್ರಭು ಮತ್ತಿತರರು ಹಾಜರಿದ್ದರು.

Back To Top
Highslide for Wordpress Plugin