Rajesh Naik

“ಜನರೇ-ಪ್ರೇರಕ ನಾನು-ಸೇವಕ” : ಕೇಂದ್ರ ಸರಕಾರದ 2ನೇ ಅವಧಿಯ ಪ್ರಥಮ ವರ್ಷದ ಸಾಧನೆಯ ಐತಿಹಾಸಿಕ ನಿರ್ಧಾರಗಳು

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಪದಾಧಿಕಾರಿಗಳ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರ ಪ್ರ.ಕಾರ್ಯದರ್ಶಿ, ಮಹಾಶಕ್ತಿ ಕೇಂದ್ರಗಳ ಪ್ರಮುಖ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿರವರ ಅಧ್ಯಕ್ಷತೆಯಲ್ಲಿ ಪಕ್ಷದ ಕಛೇರಿಯಲ್ಲಿ ಜರಗಿತು. ಕೇಂದ್ರ ಸರಕಾರದ 2ನೇ ಅವಧಿಯ ಪ್ರಥಮ ವರ್ಷದ ಸಾಧನೆಯ ಐತಿಹಾಸಿಕ ನಿರ್ಧಾರಗಳು ಹಾಗೂ “ಜನರೇ-ಪ್ರೇರಕ ನಾನು-ಸೇವಕ” ದೇಶದ ಜನರಿಗೆ ಮೋದಿಜೀ ಬರೆದಿರುವ ಪತ್ರವನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯಕ್ರಮ ಹಾಗೂ ಪಕ್ಷದ ಸಂಘಟನ್ಮಾಕ ವಿಷಯಗಳ ಬಗ್ಗೆ ಸಭೆಗೆ ಅಧ್ಯಕ್ಷರು ಮಾಹಿತಿ ನೀಡಿದರು. ಸಭೆಯಲ್ಲಿ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್, ಜಿಲ್ಲಾ ಉಪಾಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ಜಿ ಕೆ ಸುಲೋಚನಾ ಭಟ್, ಸಂದೇಶ್ ಶೆಟ್ಟಿ, ಕ್ಷೇತ್ರ ಪ್ರ.ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಉಪಸ್ಥಿತರಿದ್ದರು.

Back To Top
Highslide for Wordpress Plugin