Rajesh Naik

ಮಾಣಿಯಿಂದ 6 ನೇ ದಿನದ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆ

ಬಂಟ್ವಾಳ:  ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಆರನೆಯ ದಿನದ ಪಾದಯಾತ್ರೆಗೆ ಆದಿತ್ಯವಾರ ಬೆಳಿಗ್ಗೆ ಮಾಣಿಯಲ್ಲಿ ಚಾಲನೆ ನೀಡಲಾಯಿತು. ವಂದೆಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಯಾತ್ರೆ ಮಾಣಿ ಶಂಕರ ರೈ ಯವರ ಮನೆಯಿದ ಹೊರಟು ಸೂರಿಕುಮೇರು, ಮಾಣಿ, ದಾಸಕೋಡಿ, ನೀರಪಾದೆ, ಶಂಬೂರು, ನರಿಕೊಂಬು, ಪಾಣೆಮಂಗಳೂರು, ಬಂಟ್ವಾಳ ಪೇಟೆಯಾಗಿ ನಾವೂರು ಗ್ರಾಮಗಳಲ್ಲಿ ಸಂಚರಿಸಲಿದೆ.

6

2

4

5

7

8

1

ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಕ್ ಉಳಿಪಾಡಿಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ದೇವದಾಸ ಶೆಟ್ಟಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ತಾ.ಪಂ.ಸದಸ್ಯರಾದ ದಿನೇಶ್ ಅಮ್ಟೂರು, ಪ್ರಮುಖರಾದ ರಾಮದಾಸ್ ಬಂಟ್ವಾಳ, ಪುರುಷ ಸಾಲ್ಯಾನ್ ನೆತ್ತರಕೆರೆ, ಚರಣ್ ಜುಮಾದಿಗುಡ್ಡೆ, ಪ್ರಥ್ವಿರಾಜ್, ರಝಾಕ್, ಗಣೇಶ್ ರೈ, ಸುಜಿತ್ ಕುಮಾರ್, ನಾರಾಯಣ ಶೆಟ್ಟಿ, ತನಿಯಪ್ಪ ಗೌಡ, ಮತ್ತಿತರರು ಹಾಜರಿದ್ದರು.

Back To Top
Highslide for Wordpress Plugin