ಕಾವಳಮೂಡೂರು ಗ್ರಾಮದಲ್ಲಿ ಭಾರಿ ಗಾಳಿಗೆ ಸೀತಾರಾಮ ಶೆಟ್ಟಿ ಇಚ್ಚಿಲರವರ ಮನೆಯ ಮೆಲ್ಛಾವಣಿ ಹಾರಿಹೋಗಿದ್ದು 200ಕ್ಕೂ ಹೆಚ್ಚು ಅಡಿಕೆ ಗಿಡಗಳು ನೆಲಕಚ್ಚಿದ್ದು ಇಲ್ಲಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ,ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಗ್ರಾ.ಸಮಿತಿ ರಾಜಗೋಪಾಲ್ ನಾಯಕ್, ಶೇಷಗಿರಿ ಪೂಜಾರಿ, ಉಮೇಶ್ ಅರಳ, ಧನಂಜಯ ಶೆಟ್ಟಿ ಸರಪಾಡಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.