Rajesh Naik

ನಾವೂರು ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ನಾವೂರು ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿ ಸದಸ್ಯತಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಮುಂದೆ ಕೈಗೊಳ್ಳಬೇಕಾದ ಕೆಲಸ ಕಾರ್ಯದ ಬಗ್ಗೆ ಕೂಡ ಮಾಹಿತಿ ನೀಡಿದರು. ಬಿಜೆಪಿಗೆ ಸದಸ್ಯರು ಹೆಚ್ಚದಂತೆ ಮುಮದಿನ ದಿನಗಳಲ್ಲಿ ಪಕ್ಷವು ಇನ್ನಷ್ಟು ಬಲಶಾಲಿಯಾಗಲಿದ್ದು, ಆ ಮೂಲಕ ಮುಂದಿನ ಪಂಚಾಯತ್ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಲು ಪೂರಕವಾಗಲಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ತತ್ವ ಸಿದ್ದಾಂತ ಮತ್ತು ಮೋದಿಜಿಯವರ ನಾಯಕತ್ವವನ್ನು ಮೆಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಸುನೀಲ್, ಅಬ್ಬಸ್ ಮೈಂದಾಳ, ಇದುಬು ಮೈಂದಾಳ, ಇಲಿಯಾಸ್, ಶಮೀರ್, ಲಿನ್ಸಾರ್, ಅಬುಬಕ್ಕರ್ ಯಾನ್ ಅಬ್ಬು, ಲಿಯಾಕತ್, ನಿಝಾಮ್ ಮೈಂದಾಳ ಬಿಜೆಪಿಗೆ ಸೇರ್ಪಡೆಗೊಂಡರು.ಈ ಸಂಧರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರು ಬಿ.ದೇವದಾಸ್ ಶೆಟ್ಟಿ, ಎ.ಗೋವಿಂದ ಪ್ರಭು, ಧನಂಜಯ ಶೆಟ್ಟಿ ಪಂಚಾಯತ್ ಉಪಾಧ್ಯಕ್ಷ ವಿಜಯ ನಾವೂರು, ಪಂ.ಸದಸ್ಯರು ಸದಾನಂದ ಗೌಡ, ಜನಾರ್ಧನ, ಶೀಲಾ, ಗ್ರಾಮ ಸಮಿತಿ ಅಧ್ಯಕ್ಷ ಶಾಂತವೀರ ಪೂಜಾರಿ, ಇಬ್ರಾಹಿಂ ನಾವೂರು, ನಝೀರ್ ಮೈಂದಾಳ ಉಪಸ್ಥಿತರಿದ್ದರು.

Navur-BJP-memrship

Back To Top
Highslide for Wordpress Plugin