Rajesh Naik

ಶ್ರೀ ಹನುಮಗಿರಿ ದೇವಸ್ಥಾನದಲ್ಲಿ ತುಲಾಭಾರ ಸೇವೆ

ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಬರ್ಕೆಗುತ್ತು ಮಹಾಬಲ ರೈ ಇವರು ಬಂಟ್ವಾಳದ ಜನನಾಯಕ ರಾಜೇಶ್ ನಾೖಕ್‌ ಉಳಿಪಾಡಿಗುತ್ತು ಶಾಸಕರಾಗಿ ಚುನಾವಣೆಯಲ್ಲಿ ಗೆದ್ದು ಬಂದರೆ ಹನುಮಗಿರಿಯಲ್ಲಿ ಶಾಸಕರಿಂದ ತುಲಾಭಾರ ಸೇವೆ ಸಲ್ಲಿಸುತ್ತೇನೆಂದು ಹರಕೆ ಹೇಳಿರುತ್ತಾರೆ. ತಮ್ಮ ಹರಕೆಯ ಭಾಗವಾಗಿ ಶ್ರೀ ಹನುಮಗಿರಿ ದೇವಸ್ಥಾನದಲ್ಲಿ ತುಲಾಭಾರ ಸೇವೆಯನ್ನು ಸಜಿಪ ಗ್ರಾಮದ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕ್ಷೇತ್ರದ ಪ್ರಮುಖರಾದ ನನ್ಯ ಅಚ್ಯುತ ಮೂಡೆತ್ತಾಯ, ಪ್ರಮುಖರಾದ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ, ತಾ.ಪ ಸದಸ್ಯ ಯಶವಂತ ದೇರಾಜೆ, ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಸರ್ತಾವು, ಗ್ರಾಮ ಪಂಚಾಯತ್ ಸದಸ್ಯರು ಸೀತಾರಾಮ ಅಗೋಳಿಬೆಟ್ಟು, ಹಿಂ.ವರ್ಗ ಪ್ರ.ಕಾರ್ಯದರ್ಶಿ ವಿರೇಂದ್ರ ಕುಲಾಲ್, ಮಾಜಿ ಪುರಸಭಾ ಸದಸ್ಯ ಪಾಂಡುರಂಗ ಪ್ರಭು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Hanumagiri-Harake-2

Hanumagiri-Harake-3

Hanumagiri-Harake-1

Back To Top
Highslide for Wordpress Plugin