Rajesh Naik

ಪಕಳಬೆಟ್ಟು ಪರಿಸರದಲ್ಲಿ ನಳಿನ್ ಕುಮಾರ್ ಕಟೀಲು ಪರ ಮತಯಾಚಿಸಿದ ಶಾಸಕ ರಾಜೇಶ್ ನಾೖಕ್‌

ನಾವೂರ ಗ್ರಾಮದ ಪಕಳಬೆಟ್ಟು ಪರಿಸರದಲ್ಲಿ ಶಾಸಕರಾದ ರಾಜೇಶ್ ನಾೖಕ್‌ ಮತಯಾಚನೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಿ.ಜೆ.ಪಿ ನಳಿನ್ ಕುಮಾರ್ ಕಟೀಲು ಅವರಿಗೆ ಅಮೂಲ್ಯವಾದ ಮತವನ್ನು ನೀಡಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಮಂತ್ರಿಯನ್ನು ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಜಗತ್ತಿನಲ್ಲಿ ಭಾರತಕ್ಕೆ ವಿಶ್ವಗುರು ಸ್ಥಾನ ಸಿಕ್ಕಿದೆ. ನರೇಂದ್ರ ಮೋದಿಯವರ ಉಜ್ವಲ ಆಯುಷ್ಮಾನ್ ಇನ್ನಿತರ ಯೋಜನೆಗಳು ಜನಸಾಮಾನ್ಯರಿಗೆ ಸಹಕಾರಿಯಾಗಿದೆ. ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಸಮಸ್ಯೆಯ ಬಗ್ಗೆ ಪಾರ್ಲಿಮೆಂಟ್‌ನ ಬಗ್ಗೆ ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರದ ಗಮನಹರಿಸುವಲ್ಲಿ ಜಿಲ್ಲೆಗೆ ಅತಿಹೆಚ್ಚು ಅನುದಾನ ತಂದಿದ್ದಾರೆ. ಜಿಲ್ಲೆ ಅಭಿವೃದ್ದಿಗೆ ನಳಿನ್ ಕುಮಾರ್ ಮತವನ್ನು ನೀಡುವುದರ ಮೂಲಕ ದೇಶದ ರಕ್ಷಣೆಗೆ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಯಾಗಿಸೋಣ. ಬಂಟ್ವಾಳ ಕ್ಷೇತ್ರ ಗ್ರಾಮ ಗ್ರಾಮಗಳಲ್ಲಿ ಬಿ.ಜೆ.ಪಿ ಪರವಾದ ವಾತವರಣವಿದ್ದು ಬಿ.ಜೆ.ಪಿ ಅತಿ ಹೆಚ್ಚು ಮತಗಳು ಗಳಿಸಲಿದೆ. ಈ ಸಂದರ್ಭದಲ್ಲಿ ನಾವೂರ ಪ್ರಭಾರಿಯಾದ ಧನಂಜಯ ಶೆಟ್ಟಿ ,ಸರಪಾಡಿ ಪಂಚಾಯತ್ ಸದಸ್ಯರಾದ ಸದಾನಂದ ಗೌಡ, ಜನಾರ್ಧನ, ಜಯಂತಿ, ಪಂಚಾಯತ್ ಸಮಿತಿಯ ಅಧ್ಯಕ್ಷರಾದ ಶಾಂತವೀರ ಪೂಜಾರಿ, ಪ್ರಮುಖರಾದ ಸಂಜೀವ ಪೂಜಾರಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

RN-navur-campaign-3

RN-navur-campaign-1

RN-navur-campaign-2

Back To Top
Highslide for Wordpress Plugin