Rajesh Naik

ಅಟಲ್ ಜೀ ಯವರ 94ನೇ ಜನ್ಮ ದಿನಾಚರಣೆ – ಸುಶಾಸನ ದಿನ

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ದೇಶದ ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಜೀಯವರ 94ನೇ ವರ್ಷದ ಜನ್ಮ ದಿನಾಚರಣೆಯನ್ನು “ಸುಶಾಸನ ದಿನ” ಕ್ಷೇತ್ರದ ಬಿ.ಜೆ.ಪಿ ಕಛೇರಿಯಲ್ಲಿ ನಡೆಸಲಾಯಿತು. ಅಟಲ್ ಜೀಯವರ ಬಗ್ಗೆ ಜಿಲ್ಲಾ ಬಿ.ಜೆ.ಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿಯವರು ವಹಿಸಿದರು. ಕ್ಷೇತ್ರ ಶಾಸಕರಾದ ರಾಜೇಶ್ ನಾೖಕ್‌, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ ಉಪಸ್ಥಿತರಿದ್ದರು ಕ್ಷೇತ್ರ ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ ಸ್ವಾಗತಿಸಿದರು. ಕ್ಷೇತ್ರ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು. ಬಂಟ್ವಾಳ ಕ್ಷೇತ್ರದ ಬಿ.ಜೆ.ಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮತ್ತು ಪ್ರ.ಕಾರ್ಯದರ್ಶಿಗಳು , ಕ್ಷೇತ್ರದ ಪದಾಧಿಕರಿಗಳು, ಮೊರ್ಚಾದ ಪದಾಧಿಕಾರಿಗಳು ಗ್ರಾ.ಪಂ ಸಮಿತಿಯ ಪದಾಧಿಕಾರಿಗಳು, ಹಾಗೂ ಶಕ್ತಿಕೇಂದ್ರದ ಪ್ರಭಾರಿಗಳು ಮತ್ತು ಗ್ರಾ.ಪಂಚಾಯತ್ ಮತ್ತು ಪುರಸಭೆಯ ಜನಪ್ರತಿ ನಿಧಿಗಳು ಉಪಸ್ಥಿತರಿದ್ದರು.

Bantwal-Good-Governance-Day-2

Bantwal-Good-Governance-Day-1

Back To Top
Highslide for Wordpress Plugin