Rajesh Naik

ಬಿಜೆಪಿ ಯುವಮೋರ್ಚಾ ಬಂಟ್ವಾಳದ ವತಿಯಿಂದ ಶಾಸಕರಿಗೆ ಅಭಿನಂದನೆ

ಬಿಜೆಪಿ ಯುವಮೋರ್ಚಾ ಬಂಟ್ವಾಳದ ವತಿಯಿಂದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್‌ರವರನ್ನು ಉಳಿಪ್ಪಾಡಿ ಮನೆಯಲ್ಲಿ ಯುವಮೋರ್ಚಾ ಅದ್ಯಕ್ಷ ವಜ್ರನಾಥ ಕಲ್ಲಡ್ಕರವರ ನೇತೃತ್ವದಲ್ಲಿ ಭೇಟಿಮಾಡಿ ಬೆಳ್ಳಿಯ ಭಾವಚಿತ್ರ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಯುವಮೋರ್ಚಾದ ಸಲಹೆಗಳನ್ನು ತಿಳಿಸಿ ಅನುಷ್ಠಾನಕ್ಕೆ ಮುತುವರ್ಜಿ ವಹಿಸುವ ಬಗ್ಗೆ ಭರವಸೆ ನೀಡಿದರು. ಸ್ಥಳದಲ್ಲಿ ಕ್ಷೇತ್ರ ಕಾರ್ಯದರ್ಶಿ ರಂಜಿತ್ ಮೈರ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ್ ಬಜ, ಉಪಾದ್ಯಕ್ಷರಾದ ವಿನೀತ್ ಶೆಟ್ಟಿ, ಕಾರ್ಯದರ್ಶಿಗಳಾದ ಲೋಹಿತ್ ಅಗರಿ, ಕರುಣಾಕರ ಮೆಲ್ಕಾರ್, ಸುರೇಶ್ ಕೋಟ್ಯಾನ್, ಕೋಶಾದಿಕಾರಿ ರೂಪೇಶ್ ಆಚಾರ್ಯ, ಸದಸ್ಯರಾದ ಕಾರ್ತಿಕ್ ಬಲ್ಲಾಲ್, ನಾರಾಯಣ ಪೂಜಾರಿ, ಪ್ರಮುಖರಾದ ಜನಾರ್ದನ ಅಂಚನ್, ಶಿವರಾಜ್ ಡಿ ಪೂಜಾರಿ, ನಿವೃತ ಅಂಚೆ ಪಾಲಕ ಗಂಗಾಧರ ನಾಯ್ಕ್ ಉಪಸ್ಥಿತರಿದ್ದರು.

Bantwal-BJPYM-1

Back To Top
Highslide for Wordpress Plugin