Rajesh Naik

ಕೊಳ್ನಾಡು ಗ್ರಾಮ: ಸ್ಥಳೀಯರ ಅಹವಾಲು ಸ್ವೀಕರಿಸಿದ ರಾಜೇಶ್ ನಾಯ್ಕ್

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕೊಳ್ನಾಡು ಗ್ರಾಮದ ಕಾಡು ಮಠದ ಪರಿಶಿಷ್ಟ ಕಾಲನಿಗೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾಲನಿ ನಿವಾಸಿಗಳ ಮೂಲಭೂತ ಸೌಕರ್ಯಗಳ ಕುಂದು-ಕೊರತೆಗಳ ಪರಿಶೀಲನೆ ನಡೆಸಿದರು. ಬಳಿಕ ಈ ಭಾಗದಜನರ ಬಹುಬೇಡಿಕೆಯ ಸಮಾಜ ಮಂದಿರದ ನಿರ್ಮಾಣಕ್ಕೆರೂ ೧೦ ಲಕ್ಷ ಅನುದಾನ ಘೋಷಿಸಿದರು. ಈ ಸಂದರ್ಭದಲ್ಲಿ ಕೊಳ್ನಾಡು ತಾ.ಪಂ ಸದಸ್ಯರಾದಕುಲ್ಯಾರು ನಾರಾಯಣ ಶೆಟ್ಟಿ, ಕೊಳ್ನಾಡು ಬಿಜೆಪಿ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ, ಯುವಮೊರ್ಚಾದ ಲೋಹಿತ್‌ಅಗರಿ, ಶಕ್ತಿಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ಉಪಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಸದಾ ಶೆಟ್ಟಿ, ಬೂತ್ ಸಮಿತಿ ಅಧ್ಯಕ್ಷರಾದ ಸುಧಾಕರ ಕಾಡುಮಠ, ಹರೀಶ್ ಕಾಡುಮಠ, ಬಿಜೆಪಿಯ ಪ್ರಮುಖ ಕಾರ್‍ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

kolnadu-rn-1

kolnadu-rn-2

Back To Top
Highslide for Wordpress Plugin