Rajesh Naik

ನಮೋ ಬ್ರದರ್‍ಸ್‌ನಿಂದ ಬೈಕ್ ರ್‍ಯಾಲಿ

ಬಂಟ್ವಾಳ: ಇಲ್ಲಿನ ನಮೋ ಬ್ರದರ್‍ಸ್ ಆಶ್ರಯದಲ್ಲಿ ನಮೋ ಬ್ರದರ್‍ಸ್ ಬಿ.ಸಿ.ರೋಡು ಘಟಕದ ಉದ್ಘಾಟನಾ ಸಮಾರಂಭ ಹಾಗೂ ಬೈಕ್ ರ್‍ಯಾಲಿ ಭಾನುವಾರ ನಡೆಯಿತು. ಬೆಳಿಗ್ಗೆ ಬಿ.ಸಿ.ರೋಡು ತಾಲೂಕು ಕಚೇರಿಯ ಮುಂಬಾಗದ ಸಾರ್ವಜನಿಕ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ನಮೋ ಬ್ರದರ್‍ಸ್ ಬಿ.ಸಿರೋಡು ಘಟಕವನ್ನು ಕಾರ್ಕಳದ ಉಪನ್ಯಾಸಕ ಆದರ್ಶ ಗೋಖಲೆ ಉದ್ಘಾಟಿಸಿ ಪ್ರಧಾನ ಭಾಷಣ ಮಾಡಿದರು.

Naik 1

ಭಾರತವನ್ನು ಜಗತ್ತಿನ ಅತ್ಯಂತ ಶ್ರೇಷ್ಠ ರಾಷ್ಟ್ರ ಎಂದು ವಿಶ್ವಕ್ಕೆ ಸಾಬೀತುಪಡಿಸಲು ನರೇಂದ್ರ ಮೋದಿಯೇ ಸರ್ವ ಶ್ರೇಷ್ಠ ವ್ಯಕ್ತಿ. ಪಿ.ಎಂ. ನರೇಂದ್ರ ಮೋದಿ ಎಂದರೆ ಭಾರತದ ಪ್ರದಾನ ಮಂತ್ರಿಯಾಗಲು ಫರ್‌ಪೆಕ್ಟ್ ಮ್ಯಾನ್ ನರೇಂದ್ರ ಮೋದಿ ಎಂದು ಅರ್ಥ. ಭಾರತವನ್ನು ಇಂದು ಕಾಡುತ್ತಿರುವ ಸಮಸ್ಯೆ-ಸವಾಲು-ಅಭದ್ರತೆಗಳಿಂದ ಮುಕ್ತಗೊಳಿಸುವಲ್ಲಿ, ಸ್ವಾಭಿಮಾಣಿ ಬಾರತ ನಿರ್ಮಾಣಗೊಳ್ಳುವಲ್ಲಿ, ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗುವಲ್ಲಿ ನಾವೆಲ್ಲರೂ ಸಂಘಟಿತರಾಗಿ ಮೋದಿಗೆ ನಮ್ಮ ಗಿಪ್ಟ್ ನೀಡಬೇಕು. ಆಮೂಲಕ ಭಾರತ ಮತ್ತಮ್ಮೆ ಮೈದಳೆದು ಬೆಳಗಬೇಕು ಎಂದು ಅವರು ಹೇಳಿದರು.

naik 3

ನಂತರ ಬಿ.ಸಿ. ರೋಡಿನಿಂದ ಹೊರಟ ಬೈಕ್ ರ್‍ಯಾಲಿ ಕೈಕಂಬ, ಬಂಟ್ವಾಳ ಬೈಪಾಸ್, ಜಕ್ರಿಬೆಟ್ಟು,ಮಣಿಹಳ್ಳ ಜಂಕ್ಷನ್, ಬಂಟ್ವಾಳ ಪೇಟೆ, ಕೆಳಗಿನಪೇಟೆ,ಮೆಲ್ಕಾರ್, ಗೂಡಿನಬಳಿ ಮೊದಲಾದೆಡೆ ಸಂಚರಿಸಿತು.

Naik 2

ಉದ್ಯಮಿ ಉಳೆಪಾಡಿಗುತ್ತು ರಾಜೇಶ್ ನಾಯಕ್ ಮುಖ್ಯ ಅತಿಥಿಯಾಗಿದ್ದರು. ನಮೋ ಬ್ರದರ್‍ಸ್ ಪ್ರಮುಖರಾದ ಮನೋಹರ್, ರಾಜೇಶ್, ಸುರೇಶ್ ಕುಲಾಲ್, ಪ್ರದೀಫ್ ಬಿ.ಸಿ.ರೋಡು, ಸತೀಶ್ ಪಲ್ಲಮಜಲು, ಯೋಗೀಶ್ ಕುಲಾಲ್, ಶೈಲೇಶ್ ಮೊದಲಾದವರಿದ್ದರು.

Naik 4

Back To Top
Highslide for Wordpress Plugin