Rajesh Naik

ಬಿ.ಸಿ ರೋಡಿನ ರಿಕ್ಷಾ ಭವನದಲ್ಲಿ ಶಾಸಕರಿಗೆ ಸನ್ಮಾನ ಸಮಾರಂಭ

ಬಂಟ್ವಾಳ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ(ರಿ.) ಮೈಸೂರು ಮಂಗಳೂರು ವ್ರತ್ತ ವತಿಯಿಂದ ಬಿ.ಸಿ ರೋಡಿನ ರಿಕ್ಷಾ ಭವನದಲ್ಲಿ ನೂತನ ಶಾಸಕರಿಗೆ ಗೌರವ ನೀಡಲಾಯಿತು. ಬಳಿಕ ನೌಕರರ ವೇತನದ ಬಗ್ಗೆ ಹಾಗೂ ಹುದ್ದೆ ಖಾಯಂ ಮಾಡುವ ಬಗ್ಗೆ ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಇವರ ಮನವಿಗೆ ಸ್ಪಂದಿಸಿದ ಶಾಸಕರು ನಿಮ್ಮ ಹುದ್ದೆಯ ಬಗ್ಗೆ ಆಗಿರುವ ಅವ್ಯವಸ್ಥೆಗಳನ್ನು ಶೀಘ್ರವಾಗಿ ಸರಕಾರದ ಗಮನಕ್ಕೆ ತಂದು ಪರಿಹರಿಸುವ ಬಗ್ಗೆ ನಾನು ಶ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲಾದ್ಯಕ್ಷ  ಎಸ್. ಹರೀಶ್, ಉಪಾಧ್ಯಕ್ಷ ಬಿ.ಮೋಹನ್ ಹಾಗೂ ನೌಕರರು ಉಪಸ್ಥಿತರಿದ್ದರು.

labour-union-1

labour-union-2

Back To Top
Highslide for Wordpress Plugin