Rajesh Naik

ಸಿಎಂ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ

ಬಂಟ್ವಾಳ ತಾಲೂಕಿನ ಸರ್ವಶಿಕ್ಷಣ ಅಭಿಯಾನದಲ್ಲಿ ಬರುವ ಶಿಕ್ಷಕರಿಗೆ ಮಾರ್ಚ್ 2018ರಿಂದ ಈ ತನಕ ವೇತನ ಪಾವತಿಯಾಗದ ಬಗ್ಗೆ ಇತ್ತೀಚೆಗೆ ಸರಕಾರಿ ಶಿಕ್ಷಕರ ಪ್ರೌಶಿಕ್ಷಕರ ಸಂಘ ತಾಲೂಕು ಘಟಕ ಇತ್ತೀಚೆಗೆ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಮನವಿ ನೀಡಿದ್ದರು. ಬಂಟ್ವಾಳ ತಾಲೂಕಿನ ಸರಕಾರಿ ಪ ಪೂ ಕಾಲೇಜ್ ಪಿಲಾತಬೆಟ್ಟು ಇಲ್ಲಿನ ಎಲ್ಲಾ 6 ಉಪನ್ಯಾಸಕ ಹುದ್ದೆಗಳನ್ನು ಇತರ ಕಾಲೇಜುಗಳಿಗೆ ವರ್ಗಾಯಿಸಿದ್ದು ಸದ್ರಿ ಕಾಲೇಜನ್ನು 2018-19 ಸಾಲಿನಲ್ಲಿ ಮುಂದುವರಿಸದಂತೆ ಆದೇಶಿಸಲಾಗಿತ್ತು ಈ ಬಗ್ಗೆ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮುಂದಿನ ಅವಧಿಯಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತು ಬಂಟ್ವಾಳದ ಪ್ರಸಕ್ತ ಸಮಸ್ಯೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದರು. ಶಾಸಕರ ಮಾತನ್ನು ಆಲಿಸಿದ ಮಾನ್ಯ ಮುಖ್ಯಮಂತ್ರಿಗಳು ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಶ್ರೀ ಹೆಚ್.ಡಿ.ರೇವಣ್ಣ ಉಪಸ್ಥಿರಿದ್ದರು.

rn-meet-hdk

Back To Top
Highslide for Wordpress Plugin