Rajesh Naik

108 ಶ್ರೀ ವೀರಸಾಗರ ಮಹಾರಾಜ್‌ರವರ ಭೇಟಿ

ಪಾಣೆಮಂಗಳೂರು ಶ್ರೀ ಮಹಾವೀರ ಬಸದಿಯಲ್ಲಿ ಜೈನ ಮುನಿಗಳಾದ 108 ಶ್ರೀ ವೀರಸಾಗರ ಮಹಾರಾಜ್‌ರವರನ್ನು ಬಂಟ್ವಾಳದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಪೂಜ್ಯ ಸ್ವಾಮಿಜಿಗಳ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಬಂಟ್ವಾಳ ಜೈನ ಸಮಾಜದ ವತಿಯಿಂದ ಪೂಜ್ಯ ಶ್ರೀಗಳು ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರನ್ನು ಸನ್ಮಾನಿಸಿ, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸುವಂತೆ ಶಾಸಕರಿಗೆ ಪೂಜ್ಯ ಶ್ರೀಗಳು ಕರೆ ನೀಡಿದರು. ಈ ಸಂದರ್ಭದಲ್ಲಿ ಆರ್.ಚೆನ್ನಪ್ಪ ಕೋಟ್ಯಾನ್, ಸೀತರಾಮ ಪೂಜಾರಿ, ಚರಣ್ ಜುಮಾದಿಗುಡ್ಡೆ, ಪುಷ್ಪರಾಜ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು,ದಿನೇಶ್ ದಂಬೆದಾರ್, ಜಿನೇಂದ್ರ ಜೈನ್, ಆಧಿರಾಜ್ ಜೈನ್, ನಿರಂಜನ ಇಂದ್ರ, ಭುವನೇಶ್ ಇಂದ್ರ, ನಾಲೂರು ರತ್ನಾಕರ ಕೆಂಡೆ, ಮಹಾವೀರ ಜೈನ್, ಭರತರಾಜ್ ಜೈನ್ ಉಪಸ್ಥಿತರಿದ್ದರು.

Panemanagaluru-visit

Back To Top
Highslide for Wordpress Plugin