Rajesh Naik

ಪ್ರಥಮ ಇಲಾಖಾ ಭೇಟಿ ತಹಶಿಲ್ದಾರರ ಕಚೇರಿಗೆ ಭೇಟಿ

visit-tasildar-office

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರ ಪ್ರಥಮ ಇಲಾಖಾ ಭೇಟಿ ತಹಶಿಲ್ದಾರರ ಕಚೇರಿಗೆ ಭೇಟಿ ನೀಡಿ ತಹಶಿಲ್ದಾರ ರವಿ ಜೊತೆ ಔಪಚಾರಿಕವಾಗಿ ಮಾತನಾಡಿದರು. ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಸಿಗುವಂತೆ ಮಾಡಿ, ಯಾವುದೇ  ಇಲಾಖಾ ಸವಲತ್ತುಗಳನ್ನು ತಾರತಮ್ಯವಿಲ್ಲದೆ ಸರಿಯಾಗಿ ನೀಡುವಂತೆ ಹೇಳಿದರು. ಬಾಕಿ ಇರುವ ಎಲ್ಲಾ ಎಲ್ಲಾ ಸವಲತ್ತುಗಳನ್ನು ಫಲಾನುಭವಿಗಳಿಗೆ ಶೀಘ್ರವೇ ನೀಡುವಂತೆಯೂ ತಿಳಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಗೋವಿಂದ ಪ್ರಭು, ಪ್ರಭಾಕರ ಪ್ರಭು, ರಮೇಶ್ ಕುಡುಮೇರು, ಹರೀಶ್ ರಾಯಿ, ನಂದಕುಮಾರ್ ರೈ, ರಮಾನಾಥ ರಾಯಿ, ಖಲೀಲ್, ಗಣೇಶ್ ರೈ ಮಾಣಿ, ಸೀತಾರಾಮ ಅಗಲಿಬೆಟ್ಟು, ರಾಮಕ್ರಷ್ಣ ಮಯ್ಯ ಮತ್ತಿತರರು ಹಾಜರಿದ್ದರು.

Back To Top
Highslide for Wordpress Plugin