Rajesh Naik

ಸಂಪರ್ಕ ರಸ್ತೆ ಉದ್ಘಾಟನೆ

ಬಂಟ್ವಾಳ ಸರಕಾರದ ಅನುದಾನವಿಲ್ಲದೆ ಸ್ಥಳೀಯರ ಸ್ವಂತ ಖರ್ಚಿನಲ್ಲಿ ಬಾಳ್ತಿಲ ಮಾಜಿ ಗ್ರಾ.ಪಂ.ಸದಸ್ಯ ಬಿಕೆ ಅಣ್ಣುಪೂಜಾರಿ ಉಚಿತವಾಗಿ ನೀಡಿದ ಜಾಗದಲ್ಲಿ ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿಯಿಂದ ಮಂಜನಗುಡ್ಡೆಯಾಗಿ ಶ್ರೀರಾಮ ವಿದ್ಯಾಕೇಂದ್ರಕ್ಕೆ ಹೋಗುವ ಸಂಪರ್ಕ ರಸ್ತೆ ಮತ್ತು ಪೂರ್ಲಿಪ್ಪಾಡಿಯಿಂದ ಶಿವಾಜಿನಗರಕ್ಕೆ ಹೋಗುವ ಸಂಪರ್ಕ ರಸ್ತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಿದರು. ಈ ಸಂದರ್ಭ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ತಾಪಂ.ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಜಿ.ಪಂ.ಸದಸ್ಯೆ ಕಮಲಾಕ್ಷೀ ಕೆ ಪೂಜಾರಿ, ತಾ.ಪಂ.ಸದಸ್ಯೆ ಲಕ್ಮೀ ಗೋಪಾಲಾಚಾರ್ಯ, ಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ ನೆಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಕಾಂಪ್ರಬೈಲು ಉಳ್ಳಾಲ್ತಿ ಮತ್ತು ಅಜ್ಜರ ದೈವಸ್ಥಾನದ ಅಧ್ಯಕ್ಷ ಬ್ರಿಜೇಶ್ ಬಾಳ್ತಿಲ ಬೀಡು, ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಬಿಕೆ ಅಣ್ಣು ಪೂಜಾರಿ ಪ್ರಮುಖರಾದ ನವೀನ್ ಕುರ್ಮಾನ್, ಮೋಹನ್ ನ್ಯಾಕ್ ಮತ್ತು ಕ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Road-inaugartaion

Back To Top
Highslide for Wordpress Plugin