Rajesh Naik

ಕಲ್ಲಡ್ಕದಲ್ಲಿ “ಮುಷ್ಟಿ ಅಕ್ಕಿ” ಅಭಿಯಾನಕ್ಕೆ ಚಾಲನೆ

ಶ್ರೀ ರಾಮ ಶಾಲೆ ಕಲ್ಲಡ್ಕದ ಬಿಸಿಯೂಟದ ಅನುದಾನವನ್ನು ಸರ್ಕಾರ ರದ್ದುಗೊಳಿಸಿರುವ ಕಾರಣ ಶಾಲಾ ಮಕ್ಕಳು ಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಯಿಂದ ಭಿಕ್ಷೆ ಎತ್ತಿ ಅಕ್ಕಿ ಸಂಗ್ರಹ ಮಾಡಿ ಕೊಡಲು ನಿರ್ಧರಿಸಿ “ಮುಷ್ಟಿ ಅಕ್ಕಿ” ಅಭಿಯಾನವನ್ನು ಆರಂಭ ಮಾಡಲಾಯಿತು. ದ.ಕ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಮುಷ್ಟಿ ಅಕ್ಕಿ ಅಭಿಯಾನ ಜಿಲ್ಲಾದ್ಯಂತ ನಡೆಯಲಿದೆ. ಸಂಸದೆ ಕು. ಶೋಭಾ ಕರಂದ್ಲಾಜೆ ಈ ಅಭಿಯಾನಕ್ಕೆ ಕಲ್ಲಡ್ಕದಲ್ಲಿ ಚಾಲನೆ ನೀಡಿದರು. ಡಾ. ಪ್ರಭಾಕರ ಭಟ್ ಈ ಅಭಿಯಾನ ಅತ್ಯಂತ ಯಶಸ್ವಿಯಾಗಲೆಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜೇಶ್ ನಾಯ್ಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

DK-akki-mushti-1

DK-akki-mushti-3

DK-akki-mushti-2

Back To Top
Highslide for Wordpress Plugin