Rajesh Naik

ಶ್ರೀ ಸತ್ಯ ಸಾರಾಮಾನಿ ಕಾನದ ಕಟದ ಮೂಲಕ್ಷೇತ್ರದ ಅಭಿವೃದ್ಧಿಗಾಗಿ ರೂ. 5 ಲಕ್ಷ ಚೆಕ್ ಹಸ್ತಾಂತರ

ಮೂಡಬಿದಿರೆಯ ತಾಲೂಕು ಮಿಜಾರು ಅಲೇರಿ ಶ್ರೀ ಸತ್ಯ ಸಾರಾಮಾನಿ ಕಾನದ ಕಟದ ಮೂಲಕ್ಷೇತ್ರದ ಅಭಿವೃದ್ಧಿಗಾಗಿ ನೆರವಾಗುವ ನಿಟ್ಟಿನಲ್ಲಿ ರೂ. 5 ಲಕ್ಷ ಚೆಕ್ ಅನ್ನು ಕಚೇರಿಯಲ್ಲಿ ಜೀರ್ಣೋದ್ಧಾರ ಸಮಿತಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಶಿವರಾಜ್ ಪಿ. ಬಿ. ಬಂಟ್ವಾಳ ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್, ಬಂಟ್ವಾಳ ಬಿಜೆಪಿ ಎಸ್. ಸಿ. ಮೋರ್ಚಾದ ಅಧ್ಯಕ್ಷ ಕೇಶವ ದೈಪಲ, ಎಸ್. ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರೆಬೆಟ್ಟು, ಪ್ರಮುಖರಾದ ಪರಮೇಶ್ವರ್, ಡಾ. ಯಶ್, ದೇವದಾಸ್, ರವೀಂದ್ರ ಚೆಂಡ್ತಿಮಾರ್, ರಮಣಿ ಚೆಂಡ್ತಿಮಾರ್, ವಿಜಯ್ ಚೆಂಡ್ತಿಮಾರ್, ಗಂಗಾದರ್ ಜುಮಾದಿಗುಡ್ಡೆ, ಬೇಬಿ ಮೈರಾನಪಾದೆ, ಅಪ್ಪಿ ದೇವಶ್ಯಪಡೂರು, ಪ್ರಕಾಶ್ ಅಲ್ಲಿಪಾದೆ, ಸಂತೋ಼ಷ್ ಮೈರಾನ್ ಪಾದೆ, ಕರುಣಾಕರ ವಗ್ಗ, ರಾಜ ಚೆಂಡ್ತಿಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Back To Top
Highslide for Wordpress Plugin