Rajesh Naik

8ನೇ ದಿನದ ಗ್ರಾಮದೆಡೆಗೆ ಬಿಜೆಪಿ ನಡಿಗೆ ಇಂದು ಕಕ್ಯಬೀಡುವಿನಿಂದ ಚಾಲನೆ

ಬಂಟ್ವಾಳ:  ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ಸಾರಥ್ಯದ13 ದಿನಗಳ ’ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಎಂಟನೆಯ ದಿನದ ಪಾದಾಯಾತ್ರೆಗೆ ಮಂಗಳವಾರ ಬೆಳಿಗ್ಗೆ ಕಕ್ಯಬೀಡುವಿನ ಪಂಚದುರ್ಗಪರಮೇಶ್ವರೀ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.1.600

ವಂದೇಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಯಾತ್ರೆ ತೆಂಕಕಜೆಕಾರು, ಬಡಗಕಜೆಕಾರು, ಪುಂಜಾಲಕಟ್ಟೆ, ಇರ್ವತ್ತೂರು, ಪಿಲಾತಬೆಟ್ಟು, ಮೂಡುಪಡುಕೋಡಿ ಇರ್ವತ್ತೂರು ಗ್ರಾಮಗಳಲ್ಲಿ ಸಂಚರಿಸಿತು.

2.600

ಎಂಟನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ,ಪ್ರಮುಖರಾದ ದೇವದಾಸ್ ಶೆಟ್ಟಿ, ರಾಮದಾಸ್ ಬಂಟ್ವಾಳ, ಪರುಷ ಸಾಲ್ಯಾನ್ ನೆತ್ತರಕೆರೆ, ಚರಣ್ ಜುಮಾದಿಗುಡ್ಡೆ, ಪ್ರಥ್ವಿರಾಜ್, ಪದ್ಮನಾಭ ರೈ, ಲಲಿತೇಶ ಶೆಟ್ಟಿ, ಪ್ರಕಾಶ್ ಕರ್ಲ, ರೋಹಿತಾಶ, ಯಶೋಧರ, ವಸಂತ ಸಾಲ್ಯಾನ್, ಡೋಬಯ್ಯ ಮತ್ತಿತರರು ಹಾಜರಿದ್ದರು.

Back To Top
Highslide for Wordpress Plugin