Rajesh Naik

ಪರಿಹಾರ ನಿಧಿಯ ಚೆಕ್‌ ವಿತರಣೆ

ಇತ್ತೀಚೆಗೆ ನದಿನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಪೂವಪ್ಪ ಸಪಲ್ಯ ಬಡಗುಂಡಿ ಇವರ ಪತ್ನಿ ಗೋಪಿಯವರಿಗೆ ಪರಿಹಾರ ನಿಧಿಯ ರೂ. 5 ಲಕ್ಷದ ಚೆಕ್‌ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂಧರ್ಭದಲ್ಲಿ ಪ್ರಾಕೃತಿಕ ವಿಕೋಪಕ್ಕೀಡಾದ ಸಂತ್ರಸ್ತರಿಗೂ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್‌ನ್ನು ಶಾಸಕರು ವಿತರಿಸಿದರು. ಈ ಸಂಧರ್ಭದಲ್ಲಿ ಕಂದಾಯ ನಿರೀಕ್ಷಕರಾದ ನವೀನ್, ಗ್ರಾಮಕರಣೀಕರಾದ ರಾಜು ಲಂಬಾಣಿ, ಕುಮಾರ್, ಪ್ರವೀಣ್, ಸದಾನಂದ ನಾವೂರು, ಜನಾರ್ಧನ ಕೊಂಬೆಟ್ಟು, ಪ್ರವೀಣ್ ಗಟ್ಟಿ, ನವೀನ್ ಅಂಚನ್, ಸುಮತಿ ಎಸ್, ದಯಾನಂದ ಸಜಿಪಮುನ್ನೂರು ಉಪಸ್ಥಿತರಿದ್ದರು.

Poovappa Badagundi cheque

ಬಂಟ್ವಾಳ ತಾಲೂಕಿನ ಪಿಲಿಮೊಗರು ಗ್ರಾಮದ ಬಳ್ಳಿದಕೋಡಿ ನಿವಾಸಿಯಾದ ಶ್ರೀಮತಿ ರುಕ್ಮಿಣಿ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಸಂಬಂಧಿಕರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ.43,600 ಪರಿಹಾರ ನಿಧಿಯ ಚೆಕ್‌ನ್ನು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂಧರ್ಭದಲ್ಲಿ ಪುರುಷೋತ್ತಮ ಶೆಟ್ಟಿ, ದಿನೇಶ್ ದಂಬೆದಾರು ,ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು, ನಾಗರಾಜ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

Rukmini

Back To Top
Highslide for Wordpress Plugin