Rajesh Naik

ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಅಭಿನಂದಿಸಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಬಿಜೆಪಿಯ ರಾಜ್ಯದ ಚುಕ್ಕಾಣಿ ಹಿಡಿದ ದ.ಕ.ಸಂಸದ ನಳಿನ್ ಕುಮಾರ್ ಕಟೀಲು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಅವರು ಆಯ್ಕೆಯಾಗಿದ್ದಾರೆ ಎಂದು ಪಕ್ಷ ಘೋಷಣೆ ಮಾಡಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ರಾಜ್ಯಾಧ್ಯಕ್ಷರಾಗಿ ನಳಿನ್ ಅವರ ನೇಮಕವಾಗಿದ್ದು ಜಿಲ್ಲೆಯ ಜನತೆಗೆ ಖುಷಿಯ ವಿಚಾರ.

ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಉಡುಪಿ ಮೂಲದ ಸಂತೋಷ್ ಜಿ ಯವರು ನೇಮಕವಾದ ಬೆನ್ನಲ್ಲೇ ರಾಜ್ಯದ ಪ್ರಮುಖ ಹುದ್ದೆಯಾದ ರಾಜ್ಯಾಧ್ಯಕ್ಷ ಹುದ್ದೆ ಜಿಲ್ಲೆಗೆ ದೊರಕಿರುವುದು ಜಿಲ್ಲೆಯ ಜನತೆಗೆ ಸಂತೋಷದಾಯಕವಾದ ವಿಚಾರ.

ಸತತವಾಗಿ ಮೂರು ಬಾರಿ ಸಂಸದರಾಗಿ ಜಿಲ್ಲೆಯ ಅಭಿವೃದ್ಧಿಯ ರೂವಾರಿಯಾಗಿ ಪಕ್ಷದ ಸಂಘಟನೆ ಪ್ರಮುಖವಾದ ಪಾತ್ರವಹಿಸಿ ಹೈಕಮಾಂಡ್ ನ ಬಳಗದಲ್ಲಿ ಗುರುತಿಸಿಕೊಂಡಿದ್ದ ನಳಿನ್ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇವರ ಅವಧಿಯಲ್ಲಿ ಪಕ್ಷ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಲಯುತವಾಗಿ ಸಂಘಟಿತವಾಗಲಿ ಎಂದು ಜಿಲ್ಲೆಯ ಜನರ ಪರವಾಗಿ ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 RN-greet-NKK

Back To Top
Highslide for Wordpress Plugin