Rajesh Naik

ಪುಲ್ವಾಮಾ ದಾಳಿಗೆ ಉತ್ತರ ನೀಡಿದ ಪ್ರಧಾನಿ ಮೋದಿ; ಮೋದಿ ಮತ್ತೊಮ್ಮೆ

ಫೆ. 14 ರಂದು ನಡೆದ ಪುಲ್ವಾಮಾ ದಾಳಿ ದೇಶಕ್ಕೆ ಆಘಾತಕಾರಿ ಸುದ್ದಿಯನ್ನು ಕೊಟ್ಟಿತ್ತು. ದೇಶದ ರಕ್ಷಣೆಗೈಯ್ಯಲು ತೆರಳುತ್ತಿದ್ದ ೪೪ ಸೈನಿಕರನ್ನು ನಾವು ಕಳೆದುಕೊಂಡೆವು. ಅಂದಿನಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡಾ ಇದಕ್ಕೆ ಸರಿಯಾದ ಉತ್ತರವನ್ನು ಭಾರತ ನೀಡಬೇಕೆಂದು ಬಯಸುತ್ತಿದ್ದರು ಹಾಗೂ ಮೋದಿಯವರ ಮೇಲೆ ಭರವಸೆಯನ್ನಿಟ್ಟಿದ್ದರು.

ಇಂದು ಆ ಭರವಸೆಯನ್ನು ನಮ್ಮ ಪ್ರಧಾನಿ ಮೋದಿಯವರು ಈಡೇರಿಸಿದ್ದಾರೆ. 2014 ರಲ್ಲಿ ಪ್ರಧಾನಿಯವರು ಒಮ್ಮೆ ಭಾಷಣದಲ್ಲಿ, ‘ಈ ದೇಶದ ಮಣ್ಣಿನ ಮೇಲಾಣೆ, ಈ ದೇಶವನ್ನು ನಾನು ನಾಶವಾಗಲು ಬಿಡುವುದಿಲ್ಲ, ಈ ದೇಶವನ್ನು ನಾನು ತಲೆ ತಗ್ಗಿಸಲು ಬಿಡುವುದಿಲ್ಲ. ಭಾರತಮಾತೆ ತಲೆ ತಗ್ಗಿಸಲು ಬಿಡುವುದಿಲ್ಲ, ಭಾರತಕ್ಕೆ ಹಿನ್ನಡೆಯಾಗಲು ಬಿಡುವುದಿಲ್ಲ, ದೇಶ ಒಡೆಯಲು ಬಿಡುವುದಿಲ್ಲ’ ಎಂದಿದ್ದರು, ಅದರಂತೆ ಇಂದು ನಮ್ಮ ಪ್ರಧಾನಿಯವರು ಮತ್ತೊಮ್ಮೆ ಇದೇ ಮಾತನ್ನು ಹೇಳುವ ಮೂಲಕ ದೇಶಕ್ಕಿಂತ ದೊಡ್ಡದು ಏನೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇದು ಹೊಸ ಭಾರತದ ಸಂಕೇತ. ಇಂದು ಇಡೀ ದೇಶವೇ ಮೋದಿಯವರ ಮೇಲೆ ವಿಶ್ವಾಸವನ್ನಿಟ್ಟಿದೆ ಮತ್ತು ಮೋದಿಯವರಿಂದ ಮತ್ತು ಮೋದಿ ಸರ್ಕಾರದಿಂದ ನಮ್ಮ ದೇಶದ ಭವಿಷ್ಯ ಬದಲಾಗುತ್ತಿರುವುದನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಕೂಡಾ ನಮ್ಮ ದೇಶದ ಅಭಿವೃದ್ಧಿಗಾಗಿ, ಸುರಕ್ಷತೆಗಾಗಿ ಇಡೀ ಭಾರತದ ಜನರೆಲ್ಲರೂ ಮತ್ತೊಮ್ಮೆ ಮೋದಿಯವರ ಮೇಲೆ ವಿಶ್ವಾಸವಿಟ್ಟು ಪ್ರಧಾನಿಯನ್ನಾಗಿ ಮಾಡುವಲ್ಲಿ ಸಂಶಯವಿಲ್ಲ.

Rajesh naik-3

 

 

 

– ರಾಜೇಶ್ ನಾಯ್ಕ್ ಉಳಿಪ್ಪಾಡಿ
ಶಾಸಕರು ಬಂಟ್ವಾಳ

Back To Top
Highslide for Wordpress Plugin