Rajesh Naik

ಅನಂತ್ ಕುಮಾರ್ ಜಿಯವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ ಶಾಸಕ ರಾಜೇಶ್ ನಾಯ್ಕ್

IMG_6546ಹಿರಿಯ ಬಿಜೆಪಿ ನಾಯಕ, ರಾಜಕೀಯ ಮುತ್ಸದ್ಧಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ, ಹಾಗು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಶ್ರೀ ಅನಂತ್ ಕುಮಾರ್ ಜಿಯವರು ಇಂದು ನಮ್ಮನ್ನಗಲಿದ್ದಾರೆ. ಇಹಕಾಯವನ್ನು ತ್ಯಜಿಸಿದ ಅವರ ಆತ್ಮಕ್ಕೆ ದೇವ ಸಾಯುಜ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸೋಣ.

ಅದ್ಭುತ ಮಾತುಗಾರ, ಅತ್ಯುನ್ನತ ಸಂಘಟಕ, ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಶ್ರೀಯುತರ ಅಗಲಿಕೆ ದೇಶಕ್ಕೆ, ಪಕ್ಷಕ್ಕೆ, ಸಂಘಟನೆಗೆ ಬಹುದೊಡ್ಡ ನಷ್ಟ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ, ಸ್ನೇಹಿತರಿಗೆ, ಅಭಿಮಾನಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಶ್ರೀ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೆನೆ.

ಯು ರಾಜೇಶ್ ನಾಯ್ಕ್
ಶಾಸಕರು ಬಂಟ್ವಾಳ.

Back To Top
Highslide for Wordpress Plugin