Rajesh Naik

ಬಂಟ್ವಾಳ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಶಾಸಕರಿಗೆ ಮನವಿ

ಬಂಟ್ವಾಳ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಧೂಳು ಸಮಸ್ಯೆ ಹಾಗೂ ವಿವಿಧ ಬೇಡಿಕೆಯನ್ನು ಪೂರೈಸಲು ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ನೀಡಿದರು. ಬಿಸಿರೋಡಿನ ಹಳೆ ಎಲ್.ಐ.ಸಿ.ಯಿಂದ ಪಿಂಟೋ ಕಾಂಪ್ಲೆಕ್ಸ್ ವರೆಗೆ ರಸ್ತೆ ದುರಸ್ತಿ ಪಡಿಸಿ ಧೂಳಿನಿಂದ ನಮ್ಮನ್ನು ಮುಕ್ತಿಗೊಳಿಸಿ ಎಂದು ಅವರು ಹೇಳಿದ್ದಾರೆ. ಗ್ರಾಮಾಂತರ ಪರವಾನಿಗೆ ಹೊಂದಿದ ರಿಕ್ಷಾದವರು ಬಿಸಿರೋಡಿನಲ್ಲಿ ಬಾಡಿಗೆ ಮಾಡದಂತೆ ಕ್ರಮ ಕೈಗೊಳ್ಳಲು ಕೂಡ ಮನವಿ ಮಾಡಿದರು. ಈಗಾಗಲೇ ಎ.ಎಸ್.ಪಿ. ಹಾಗೂ ಟ್ರಾಫಿಕ್ ಪೋಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ಇದೇ ಸಂಧರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಸಂತ್ ಕುಮಾರ್ ಮಣಿಹಳ್ಳ ಚಾಲಕ ಸಂಘದ ಕಾರ್ಯದರ್ಶಿ ಶೇಖರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

auto-sangh-request-1

Back To Top
Highslide for Wordpress Plugin