Rajesh Naik

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಬಗೆಹರಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಬಗೆಹರಿಸಲು ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಸೂಚನೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಶೀಘ್ರ ಬಗೆಹರಿಸಿ, ಕೇಂದ್ರ ಸರಕಾರದ ಉಚಿತ ವಿದ್ಯುತ್ ಸಂಪರ್ಕ ಯೋಜನೆಗಲಾದ ದೀನ್‌ದಯಾಳ್ ಯೋಜನೆ, ಸೌಭಾಗ್ಯ ಯೋಜನೆಯಡಿ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ ಪ್ರಗತಿ ಸಾಧಿಸಲು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೂಚಿಸಿದರು. ಅವರು ವಿದ್ಯುತ್‌ಗೆ ಸಂಬಂಧಿಸಿದಂತೆ ಮೆಸ್ಕಾಂ ಸೂಪರಿಡೆಂಟ್ ಇಂಜಿನಿಯರ್ ಮಂಜಪ್ಪರನ್ನು ಸಂಪರ್ಕ ಮಾಡಿ ಹೋಟೆಲ್ ರಂಗೋಲಿಯಲ್ಲಿ ಬಂಟ್ವಾಳ ವಿಭಾಗ ಕಾರ್ಯಕಾರಿ ಇಂಜಿನಿಯರ್ ಸಂತೋಷ್ ಮತ್ತು ತಂಡದ ಜೊತೆಗೆ ಸಮಲೋಚನೆ ನಡೆಸಿದರು. ಸಭೆಯಲ್ಲಿ ರಾಮದಾಸ ಬಂಟ್ವಾಳ, ಗೋವಿಂದ ಪ್ರಭು, ದಿನೇಶ್ ಅಮ್ಟುರು, ರಮಾನಾಥ ರಾಯಿ, ಸೀತರಾಮ ಪೂಜಾರಿ,ರೋನಾಲ್ಡ್ ಡಿಸೋಜ, ಪ್ರಭಾಕರ ಪ್ರಭು, ಹರೀಶ್ ಆಚಾರ್ಯ, ಸಂತೋಷ್ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಆನಂದ ಶಂಭೂರು, ಪುಷ್ಪರಾಜ್ ಶೆಟ್ಟಿ, ಮನೋಜ್ ಕಳ್ಳಿಗೆ, ಬಾಲಕೃಷ್ಣ ಸೆರ್ಕಳ, ಜೆರಾಲ್ಡ್, ಸಹಾಯಕ ಇಂಜಿನೀಯರ್‌ಗಳಾದ ಹರೀಶ್, ನಾರಾಯಣ ಭಟ್, ಸುನಿಲ್ ಸಹಿತ ಎಲ್ಲಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

hescom

Back To Top
Highslide for Wordpress Plugin