Rajesh Naik

ನೆತ್ತರಕೆರೆ ಕಳ್ಳಿಗೆ: ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ

ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ನೆತ್ತರಕೆರೆ ಕಳ್ಳಿಗೆ ಇದರ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್‍ಯಕ್ರಮವು ಮೂಂಡಾಜೆಗುತ್ತು ವಿಠಲ ಶೆಟ್ಟಿ ಸಭಾಭವನದಲ್ಲಿ ನಡೆಯಿತು. ಕಾರ್‍ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಕ್ ಉಳಿಪ್ಪಾಡಿಯವರು ನೆರೆವೇರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಶಾಲೆಗೆ ನೆರೆವು ನೀಡಿದ ದಾನಿಗಳನ್ನು ಮತ್ತು ನವೋದಯ ಮಿತ್ರ ವೃಂದದ ಕಾರ್‍ಯವನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾದ ಅನುದಾನವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನಪಡುವುದಾಗಿ ಭರವಸೆಯನ್ನು ನೀಡಿದರು. ಈ ಸಮಾರಂಭದಲ್ಲಿ ಕಳ್ಳಿಗೆ ಗ್ರಾ.ಪಂ ಉಪಾಧ್ಯಕ್ಷರಾದ ಪುರುಷ.ಎನ್ ಸಾಲ್ಯಾನ್, ದಾನಿಗಳಾದ ಜ್ಯೋತಿಂದ್ರ ಪ್ರಸಾದ್ ಶೆಟ್ಟಿ ಮುಂಡಾಜೆಗುತ್ತು, ನಾರಯಣ ಹೊಳ್ಳ ನೆತ್ತರಕೆರೆ, ನವೀನ್‌ಚಂದ್ರ ಶೆಟ್ಟಿ, ಶಾಲಾಭಿವೃದ್ದಿಯ ಮೇಲುಸ್ತುವಾರಿ ಭಾಸ್ಕರ ಎನ್, ನವೋದಯ ಮಿತ್ರವೃಂದದ ಅಧ್ಯಕ್ಷರಾದ ಬಿ.ಸುರೇಶ್ ಭಂಡಾರಿ ಅರ್ಬಿ, ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್, ಸರಸ್ವತಿ ಹೊಳ್ಳರ ಬೈಲು, ಪ್ರಾಸ್ತಾವಿಕ ಭಾಷಣವನ್ನು ದಾಮೋದರ ನೆತ್ತರಕೆರೆ ನೆರೆವೇರಿಸಿದರು, ಕಾರ್‍ಯಕ್ರಮದ ಸ್ವಾಗತ ಮತ್ತು ಧನ್ಯವಾದನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗುಣರತ್ನ ನೆರೆವೇರಿಸಿದರು.

Nettakeri-1

Nettakeri-2

Nettakeri-3

Back To Top
Highslide for Wordpress Plugin