Rajesh Naik

ಪುಂಚೋಡಿಯಲ್ಲಿ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮ

ಪಂಜಿಕಲ್ಲು ಗ್ರಾಮದ ಪುಂಚೋಡಿಯಲ್ಲಿ ಬಿಜೆಪಿ ಕಾರ್‍ಯಕರ್ತರ ಅಭಿನಂದನಾ ಸಭೆ ನಡೆಯಿತು. ಸಭೆಯಲ್ಲಿ ಬಂಟ್ವಾಳದ ಶಾಸಕರಾದ ಶ್ರೀ ರಾಜೇಶ್ ನಾಕ್ ಉಳಿಪ್ಪಾಡಿ ಮಾತನಾಡಿ ಪಕ್ಷ ಸಂಘಟಿತವಾಗಿ ಈ ಬಾರಿ ಚುನಾವಣೆಯನ್ನು ಎದುರಿಸಿದ್ದರಿಂದ ಗೆಲುವು ನಮ್ಮದಾಯಿತು ಪಕ್ಷದ ಪ್ರತಿಯೊಬ್ಬ ಕಾರ್‍ಯಕರ್ತರು ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸದ್ದು ಅವರಿಗೆ ನಿಜವಾಗಿಯೂ ಅಭಿನಂದನೆ ಸಲ್ಲಬೇಕು ಎಂದರು.ಬಳಿಕ ಬಿಜೆಪಿ ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ ಮಾತನಾಡಿ ಬಂಟ್ವಾಳದಲ್ಲಿ ದುರಹಂಕಾರದ ರಾಜಕಾರಣಕ್ಕೆ ಸೋಲಾಗಿದೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರೋಧಿಗಳು ಒಂದಾಗಿದ್ದು ಕಾರ್‍ಯಕರ್ತರು ಈ ಸವಾಲನ್ನು ಎದುರಿಸಲು ಸಿದ್ಧರಿರಬೇಕು ಎಂದರು. ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ ಪಂಜಿಕಲ್ಲು ಭಾಗದ ಕಾರ್‍ಯಕರ್ತರ ಪರಿಶ್ರಮದಿಂದ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿಗೆ ಒಂದು ಸಾವಿರಕ್ಕೂ ಮಿಕ್ಕಿದ ಮತಗಳ ಮುನ್ನಡೆ ದೊರಕಲು ಸಾಧ್ಯವಾಯಿತೆಂದರು. ಬಳಿಕ ಸಂಜೀವ ಪೂಜಾರಿ ಪಿಲಿಂಗಾಲು ಮಾತನಾಡಿ ಬಿಜೆಪಿ ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರರಿಗೂ ಕಾರ್‍ಯಕರ್ತರಿಗೂ ಅಭಿನಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕರುಣೇಂದ್ರ ಪೂಜಾರಿ, ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರಾದ ಚಿದಾನಂದ ಕುಲಾಲ್, ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಲಕ್ಷ್ಮಣ್ ಪಂಜಿಕಲ್ಲು, ದಯಾನಂದ ಗೌಡ, ಹರೀಶ್ ಪೂಜಾರಿ, ಮಾಜಿ ಅಧ್ಯಕ್ಷೆ ಹರೀಣಾಕ್ಷಿ, ಬೂತ್ ಸಮಿತಿ ಅಧ್ಯಕ್ಷರಾದ ವಿಕೇಶ್, ಕೆ.ಎನ್ ಶೇಖರ್ ಮತ್ತು ಪಕ್ಷದ ಪ್ರಮುಖ ಕಾರ್‍ಯಕರ್ತರು ಉಪಸ್ಥಿತರಿದ್ದರು.

punchodi

Back To Top
Highslide for Wordpress Plugin