Rajesh Naik

10ನೇ ದಿನಕ್ಕೆ ಕಾಲಿರಿಸಿದ ಪರಿವರ್ತನೆಗೆ ನಮ್ಮ ನಡಿಗೆ

ಬಂಟ್ವಾಳ ಬಿಜೆಪಿ ನೇತೃತ್ವದ ರಾಜೇಶ್ ನಾಯ್ಕ್ ಸಾರಥ್ಯದಲ್ಲಿ ಬಂಟ್ವಾಳದ ಪರಿವರ್ತನೆಗೆ ನಮ್ಮ ನಡಿಗೆ 10ನೇ ದಿನಕ್ಕೆ ಕಾಲಿರಿಸಿದೆ ಸೋಮವಾರ ಸಂಜೆ ಕಲ್ಲಡ್ಕದ ಸಾರ್ವಜನಿಕ ಸಭೆಯ ಬಳಿಕ ದ.ಕ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿಯವರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಬೆಳಿಗ್ಗೆ 8.00ಗಂಟೆಗೆ ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ ಅಪಾರ ಕಾರ್ಯಕರ್ತರೊಂದಿಗೆ ಹನುಮಾನ್ ನಗರದ ಶ್ರೀರಾಮ ವಿದ್ಯಾಕೇಂದ್ರದ ರಸ್ತೆಯ ಮೂಲಕ ಬಾಳ್ತಿಲ ಗ್ರಾಮಕ್ಕೆ ಪ್ರವೇಶಿಸಿತು. ಮಾಜಿ ಜಿ.ಪಂ ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಠಲ ನಾಯ್ಕ್, ಬಿಜೆಪಿ ಅಧ್ಯಕ್ಷರಾದ ಲೋಕಾನಂದ ಪೂಜಾರಿ ಏಳ್ತಿಮಾರ್ ಮತ್ತು ಬಾಳ್ತಿಲ ಬಿಜೆಪಿ ಕಾರ್ಯಕರ್ತರುಗಳಿಂದ ಸ್ವಾಗತಿಸಲಾಯಿತು. ನಂತರ ಶಂಭೂರಿನ ಕಕ್ಕೆಮಜಲಿನಲ್ಲಿ ಗೋಳ್ತಮಜಲು ಶಕ್ತಿಕೇಂದ್ರ ಅಧ್ಯಕ್ಷರಾದ ಆನಂದ ಶಂಭೂರು, ಪಂಚಾಯತ್ ಅಧ್ಯಕ್ಷರಾಧ ಯಶೋಧರ ಕರ್ಬೆಟ್ಟು, ಬಿಜೆಪಿ ಅಧ್ಯಕ್ಷರಾದ ಪುರುಷೋತ್ತಮ ಎಸ್ ಮತ್ತು ಅಪಾರ ಸಂಖ್ಯೆಯಲ್ಲಿ ನರಿಕೊಂಬು, ಶಂಭೂರುವಿನ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿ, ಪಾದಯಾತ್ರೆಯೊಂದಿಗೆ ಪಾಣೆಮಂಗಳೂರು ಕಡೆ ಹೆಜ್ಜೆ ಹಾಕಿದರು, ದಾರಿ ಮಧ್ಯದಲ್ಲಿ ಮೊಗರ್ನಾಡು ಜಂಕ್ಷನ್‌ನಲ್ಲಿ ಕೇಶವ ಶಾಂತಿಯವರು ಪಾದಯಾತ್ರೆಯ ಸಾರಥ್ಯವಹಿಸಿಕೊಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಹೂಹಾರ ಹಾಕಿ ಶುಭಕೋರಿದರು. ನಂತರ ಪಾದಯಾತ್ರೆಯ ಮೂಲಕ ಮೊಗರ್ನಾಡು ಲಕ್ಷ್ಮೀನರಸಿಂಹ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಪಾಣೆಮಂಗಳೂರಿಗೆ ತಲುಪಿದಾಗ ಕಲ್ಲುರ್ಟಿ ಗುಡಿಯಲ್ಲಿ ಉಮೇಶ್ ಸಫಲ್ಯರು ಪ್ರಾರ್ಥಿಸಿ ಪಾದಯಾತ್ರೆಗೆ ಶುಭಕೋರಿದರು. ಬಳಿಕ ಸುಮಂಗಲ ಕಲ್ಯಾಣ ಮಂಟಪದಲ್ಲಿ ಮದ್ಯಾಹ್ನದ ಭೋಜನ ಸ್ವೀಕರಿಸಿ ವಿಶ್ರಾಂತಿ ಪಡೆದರು. ಪಾದಯಾತ್ರೆಯ ಉದ್ದಕ್ಕೂ ಭಾರಿ ಜನಬೆಂಬಲ ವ್ಯಕ್ತವಾಗಿದ್ದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು.

ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ , ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿ.ಪಂ ಸದಸ್ಯರಾದ ಕಮಾಲಕ್ಷಿ ಪೂಜಾರಿ ತಾ.ಪಂ ಸದಸ್ಯರಾದ ಲಕ್ಷ್ಮೀಗೋಪಾಲಾಚಾರ್ಯ, ಪುರಸಭಾ ಸದಸ್ಯರಾದ ಸಂಧ್ಯಾ ನಾಯ್ಕ ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಕಾರ್ಯದರ್ಶಿಗಳಾದ ಸೀತರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷರಾದ ದಿನೇಶ್ ಅಮ್ಟೂರು, ಜಿಲ್ಲಾ ಸಮಿತಿ ಸದಸ್ಯರಾದ ರೋನಾಲ್ಡ್ ಡಿ ಸೋಜಾ, ರೈತಮೋರ್ಚಾದ ತನಿಯಪ್ಪ ಗೌಡ, ಪುರುಷೋತ್ತಮ ಶೆಟ್ಟಿ ವಾಮದಪವು, ಅಣ್ಣು ಪೂಜಾರಿ, ಪಿ.ಎಸ್.ಮೋಹನ್ ಎಸ್.ಸಿ ಮೋರ್ಚಾದ ರಮೇಶ್ ಕುದ್ರೆಬೆಟ್ಟು, ಲೋಕಯ್ಯ, ಯುವಮೋರ್ಚಾದ ವಜ್ರನಾಥ ಕಲ್ಲಡ್ಕ, ಸಂತೋಷ್ ರಾಯಿಬೆಟ್ಟು, ನಾರಾಯಣ ಪೂಜಾರಿ ದರ್ಖಾಸು, ಸುರೇಶ್ ಕೋಟ್ಯಾನ್, ಅಶೋಕ್ ಮರ್ದೊಳಿ, ಸಂಪತ್ ಕೋಟ್ಯಾನ್, ಕಾರ್ತಿಕ್ ಬಳ್ಳಾಲ್, ಪಂಚಾಯತ್ ಉಪಾಧ್ಯಕ್ಷರಾದ ಪೂರ್ಣಿಮಾ, ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ದಿವಾಕರ ಶಂಭೂರು, ಶಿವರಾಜ್, ರಂಜಿತ್ ಕೆದ್ದೆಲ್, ಚಂದ್ರಾವತಿ, ಪೂರ್ಣಿಮ, ಉದಯ ಶಂಭೂರು, ವಸಂತ ಬೀಮಗದ್ದೆ, ಹೇಮಲತಾ, ಗೀತಾ,ವಿಶಾಲಾಕ್ಷಿ, ಜಯ ಶಂಭೂರು, ಪಕ್ಷದ ಪ್ರಮಖರಾದ ಪದ್ಮನಾಭ ಮಯ್ಯ, ಲೋಹಿತಾಕ್ಷ ಮರ್ದೊಳಿ ಪ್ರಕಾಶ್ ಕೋಡಿಮಜಲ್, ಡೊಂಬಯ ಟೈಲರ್, ಆನಂದ ಶೆಟ್ಟಿ, ಸುರೇಶ್ ಶೆಟ್ಟಿ ಕಾಂದಿಲ, ವೆಂಕಟ್ರಾಯ ಪ್ರಭು, ವಸಂತ ಸಾಲ್ಯಾನ್, ಯತಿನ್ ಕುಮಾರ್, ಸುಜಿತ್ ಕೊಟ್ಟಾರಿ, ಜನಾರ್ಧನ ಬೊಂಡಾಲ, ಕ.ಕೃಷ್ಣಪ್ಪ, ಬಾಲಕೃಷ್ಣ ಆಳ್ವಾ, ಸುಂದರ ಸಾಲ್ಯಾನ್, ಲೋಲಾಕ್ಷಿ,ಸ್ವಾತಿ, ಜಯಂತಿ ವರದರಾಜ್, ಮಹೇಶ್ ರಾಯಸ, ಉದಯ ಶೆಟ್ಟಿ, ಯತೀಶ್ ಶೆಟ್ಟಿ, ದೇವದಾಸ ನಾಯಿಲ, ರಘು ಸಫಲ್ಯ, ಸುದರ್ಶನ್ ಮೆಲ್ಕಾರ್, ಸಚಿನ್ ಮೆಲ್ಕಾರ್, ಕಮಲಾಕ್ಷ ಶಂಭೂರು, ಚಂದ್ರಹಾಸ ಗಟ್ಟಿ, ಜ್ಞಾನೇಶ್ವರ ಪ್ರಭು, ದಿನೇಶ್ ಬಂಗೇರಾ, ಪುರುಷೋತ್ತಮ ನಾಟಿ, ಕಮಲಾಕ್ಷ ಶಾಂತಿಲ, ರಾಜೇಶ ಆಚಾರ್ಯ, ಚಂದ್ರಹಾಸ ಕೋಡಿ, ಕೇಶವ ಪಿ.ಎಚ್ ಮತ್ತು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

panemlore-2

panemlore-1

Back To Top
Highslide for Wordpress Plugin