Rajesh Naik

ಶ್ರೀ ಅಣ್ಣಪ್ಪ ಪಂಜುರ್ಲಿ ಮೂಲ ಸ್ಥಾನ ಮಂಜನಗುಡ್ಡೆ ಕುರ್ಮಾನ್ ವಾರ್ಷಿಕ ಮಹಾಸಭೆ

ಶ್ರೀ ಅಣ್ಣಪ್ಪ ಪಂಜುರ್ಲಿ ಮೂಲ ಸ್ಥಾನ ಮಂಜನಗುಡ್ಡೆ ಕುರ್ಮಾನ್ ಇದರ ಗೌರವಾಧ್ಯಕ್ಷರಾಗಿ ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರು ಆಯ್ಕೆಯಾಗಿದ್ದಾರೆ, ಅಧ್ಯಕ್ಷರಾಗಿ ಕಾ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ.ಅಣ್ಣು ಪೂಜಾರಿ, ಉತ್ಸವ ಸಮಿತಿ ಅಧ್ಯಕ್ಷರಾಗಿ ಮೋಹನ್ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ರೂಪೇಶ್ ಕುರ್ಮಾನ್ ಹಾಗೂ ಮಾತೃ ಸಮಿತಿ ಅಧ್ಯಕ್ಷರಾಗಿ ಸುಜಾತ ಬೊಲ್ಪೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಗಾಯತ್ರಿ ಪ್ರಕಾಶ್ ಮತ್ತು ಉಮಾವತಿ ಇವರನ್ನು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ .ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರು ದೇವಸ್ಥಾನದಲ್ಲಿ ಸಂಪತ್ತಿನ ಕ್ರೋಡಿಕರಣವಲ್ಲದೆ ಸಮಾಜದಿಂದ ಬಂದಿರುವ ಕಾಣಿಕೆಯನ್ನು ದೇವಸ್ಥಾನದ ಮೂಲಕ ಸಮಾಜದ ಕಲ್ಯಾಣಕ್ಕಾಗಿ ವಿನಿಯೋಗ ಮಾಡುವಂತೆ ಕರೆ ನೀಡಿದರು, ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಜಿ.ಪಂ. ಸದಸ್ಯೆ ಕಮಲಾಕ್ಷೀ ಪೂಜಾರಿ ಪ್ರಮುಖರಾದ ಚೆನ್ನಪ್ಪ ಆರ್ ಕೊಟ್ಯಾನ್, ದಿನೇಶ್ ಅಮ್ಟೂರು, ತಾ.ಪಂ.ಸದಸ್ಯೆ ಲಕ್ಮೀ ಗೋಪಾಲಾರ್ಯ, ಬಿ.ಕೆ ಅಣ್ಣು ಪೂಜಾರಿ, ರಾಮಕೃಷ್ಣ ಪುದುವಾಳ್, ಬ್ರಿಜೇಶ್ ಬಾಳ್ತಿಲ ಬೀಡು, ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಸದಸ್ಯರಾದ ವೆಂಕಟರಾಯ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

board-meet

Back To Top
Highslide for Wordpress Plugin